Tuesday, September 2, 2008

ಮಣ್ಣಿಗಾಗಿ


ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ತಿಲಕರು ಆರಂಭಿಸಿದ್ದು; ಈ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ, ಹೋರಾಟ ಬಲಗೊಳಿಸಬೇಕು ಎಂಬ ಉದ್ದೇಶದಿಂದ.

ಗಣೇಶನ ವಿಗ್ರಹವನ್ನು ಮಾಡುವುದು ಕೂಡ ಮಣ್ಣಿನಿಂದಲೇ.

ಇವತ್ತು ನಮ್ಮ ಮಣ್ಣು ಎಸ್ಇಝಡ್, ನಾಗಾರ್ಜುನ ಅಂತೆಲ್ಲ ಕಾರ್ಖಾನೆಗಳಿಗೆ ಆಹುತಿಯಾಗುತ್ತಿರುವ, ವಿದೇಶಿ ಕಂಪೆನಿಗಳ ಪಾಲಾಗುತ್ತಿರುವ ಹೊತ್ತು.

ಅವತ್ತು ನಮ್ಮ ಮಣ್ಣನ್ನು(ದೇಶವನ್ನು) ಉಳಿಸಿದ ಮಣ್ಣ ಗಣೇಶನನ್ನು ಮಾಡಿ ಉತ್ಸವ ಆಚರಿಸುವ ಸಮಿತಿಗಳು, ಸಂಘಟನೆಗಳು, ಇವತ್ತು ಮತ್ತೆ ವಿದೇಶಿ ಕಂಪೆನಿಗಳಿಂದ, ವಿಷಕಾರಕ ಕಾರಖಾನೆಗಳಿಂದ ನಮ್ಮ ಮಣ್ಣನ್ನು ಉಳಿಸಿಕೊಳ್ಳಬೇಡವೇ?

ಅವತ್ತು ಉದ್ದೇಶ ಬೇರೆಯಿತ್ತು, ಇವತ್ತೂ ಗಣೇಶೋತ್ಸವದ ನೆಪದಲ್ಲಿ ಸಂಘಟಿತರಾಗುತ್ತಲೇ ನಮ್ಮ ಮಣ್ಣನ್ನು ಹಾಳಾಗದಂತೆ, ಕೈಗಾರಿಕೆಗಳ ಪಾಲಾಗದಂತೆ ಕಾಪಾಡಬೇಕಾದ ಜವಾಬ್ದಾರಿ ಹೊರಬೇಕಲ್ಲ?

ಬದಲಾಗಿ ಜೈ ಗಣೇಶ ಅಂತೆಲ್ಲ ಕುಣಿಸುವ, ಒಂಚೂರೂ ಭಕ್ತಿ ಹುಟ್ಟಿಸದ ಫಿಲ್ಮ್ ಡಾನ್ಸ್ ಗಳಿಗೆ ಕುಪ್ಪಳಿಸಲು ಪ್ರೇರೇಪಿಸಿ, ತಿಲಕರ ಕನಸು, ಉದ್ದೇಶವನ್ನೇ ಬುಡಮೇಲಾಗಿಸುವುದು ಸರಿಯಾ?

2 comments:

ಶ್ರೀನಿಧಿ.ಡಿ.ಎಸ್ said...

ಹ್ವಾಯ್! ಇಷ್ಟೊಂದು ಪೋಸ್ಟ್ ಗಳು! ಇವತ್ ನೋಡಿದೆ:) ಶುಭವಾಗಲಿ!

ಹರೀಶ ಮಾಂಬಾಡಿ said...

ಖಂಡಿತಾ ಸರಿ ಅಲ್ಲ....