Saturday, January 3, 2009

ಸ್ವಾಮಿಯೇ ಶರಣಂ ಅಯ್ಯಪ್ಪ

ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತನಿಂದ ಕೇರಳ ಸರಕಾರ ಒಂದು ತಲೆಗೆ ನೂರಿಪ್ಪತ್ತೈದು ರೂಪಾಯಿ ವಸೂಲು(ದರೋಡೆ) ಮಾಡುತ್ತದೆ ಅಂತ ಪ್ರತಿಭಟನೆ ನಡೆಯಿತು ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದೆ. ನೀವೂ ಓದಿರಬಹುದು.
ಪ್ರತಿಯೊಂದಕ್ಕೂ ಸ್ವಾಮಿ ಶರಣಂ ಹೇಳುತ್ತ, ಗೋಪಾಲ ಸ್ವಾಮಿ, ಮಾಧವ ಸ್ವಾಮಿ, ಸತೀಶ್ ಸ್ವಾಮಿ ಎಂದೆಲ್ಲ ವ್ಯಕ್ತಿಗಳನ್ನು ಸ್ವಾಮಿ ಸ್ವಾಮಿ ಅಂತಲೇ ಕರೆಯುವ ಅಯ್ಯಪ್ಪ ಭಕ್ತರು ಕೊನೆಗೆ ಅಬ್ದುಲ್ ಸ್ವಾಮಿ, ಮಯ್ಯದ್ದಿ ಸ್ವಾಮಿ, ಆಲ್ವಿನ್ ಸ್ವಾಮಿ, ಡಿಸೋಜ ಸ್ವಾಮಿ ಎಂದು ಕ್ರಿಶ್ಚಿಯನ್, ಮುಸ್ಲಿಮರನ್ನೂ ಸ್ವಾಮಿ ಸ್ವಾಮಿ ಎಂದು ಕರೆಯುವಾಗ ಒಂಥರಾ ವಿಚಿತ್ರ ಅನ್ನಿಸುತ್ತದೆ. ನಾನು ಹೀಗೆ ತಮಾಷೆ ಮಾಡಿದೆ ಅಂತ ಅಯ್ಯಪ್ಪ ಭಕ್ತರಿಗೆ ಕೋಪ ಬಂದ್ರೆ ಸ್ವಾಮಿ ಶರಣಂ!
ಅಯ್ಯಪ್ಪ ಭಕ್ತರು ವ್ರತದಲ್ಲಿರುವಾಗ ಬಾಳೆ ಎಲೆಯಲ್ಲೇ ಊಟ, ತಿಂಡಿ ತಿನ್ನುತ್ತಾರೆ. ಚಪ್ಪಲು ಹಾಕುವುದಿಲ್ಲ, ಕಪ್ಪು, ಕೇಸರಿ ಮುಂಡು ಅಥವಾ ಕೊನೆಪಕ್ಷ ಬೈರಾಸು ಕಟ್ಟಿಕೊಳ್ಳುತ್ತಾರೆ, ಚಂದದ ಹುಡುಗಿಯರನ್ನು ನೋಡುವಂತಿಲ್ಲ. ನೋಡಿದರೆ ಸ್ವಾಮಿ ಶರಣಂ!
ಬ್ಯಾವರ್ಸಿ, ಗೀವರ್ಸಿ, ಹಲ್ಕಟ್ ಅಂತೆಲ್ಲ ಬೈಯುವಂತಿಲ್ಲ. ಬೈಯ್ದರೆ ಸ್ವಾಮಿ ಶರಣಂ ಅಂದ್ರೆ ಆಯಿತು!
ಶರಾಬು, ವಿಸ್ಕಿ ಇತ್ಯಾದಿ ಅಮಲು ಕುಡಿಯುವಂತಿಲ್ಲ. ಗುಟುಕಾ ನಿಷೇಧ. ಬೀಡಿ ಸಿಗರೇಟು ಬಿಡಬೇಕು. ಮಾಂಸ ತಿಂದರೆ ಪಾಪ! ಕೊನೇಗೆ ತಡೆಯಲಿಕ್ಕಾಗದೆ ಗುಟಕಾ ತಿಂದರೆ ಸ್ವಾಮಿ ಶರಣಂ!
ಹೀಗೆ ಕೆಟ್ಟ ಹಾದಿಯಿಂದ ಸರಿದಾರಿಗೆ ಬರುವ ಪ್ರಯತ್ನ ಮಾಡುವ ಅಯ್ಯಪ್ಪ ವ್ರತಧಾರಿ ಭಕ್ತರನ್ನು ಸುಲಿಯುವ ಕಮ್ಯುನಿಷ್ಟ್ ಸರಕಾರಕ್ಕೆ ಧಿಕ್ಕಾರ ಹೇಳದಿದ್ದರೆ ಹೇಗೆ?
ಮಕ್ಕಾ ಯಾತ್ರೆಗೆ ಹೋಗುವ ಭಕ್ತರಿಗೆ ಖರ್ಚಿಗೆ ಕೊಡುವ ಸರಕಾರಗಳಿಗೆ ಕಾಶಿ, ಮಥುರಾ, ಅಯೋಧ್ಯೆ, ಶಬರಿಮಲೆಗಳಿಗೆ ಹೋಗುವ ಭಕ್ತರಿಗೆ ಕೊಡಲು ದುಡ್ಡಿಲ್ಲ. ಬದಲಾಗಿ ಅಯ್ಯಪ್ಪ ಭಕ್ತರಿಂದಲೇ ಹೀಗೆ ಲೂಟಲು ಕೂರುತ್ತವೆ. ಈ ಹಿಂದೂ ದೇವರುಗಳೂ ಸರಿಯಿಲ್ಲ ಮಾರಾಯ್ರೇ. ಇಲ್ಲದಿದ್ದರೆ ಭಕ್ತರಿಂದ ತನ್ನ ಕಾಣಿಕೆ ದೋಚುವ ರಕ್ಕಸರನ್ನು ಕಷ್ಟಕ್ಕೆ ನೂಕಿ, ನಾಶ ಮಾಡಲು ಆಗುದಿಲ್ವಾ?!
ಇನ್ನೂ ಬರೆಯಲಿಕ್ಕಿದೆ. ಹೆಚ್ಚು ಊಊದ್ದದ ಬರೆಹಗಳನ್ನು ಓದುವವರು ಕಡಿಮೆ(ನನ್ನಂತೆ) ಆದುದರಿಂದ ಇಷ್ಟೇ ಸಾಕು.
ಸ್ವಾಮಿಯೇ ಶರಣಂ.

5 comments:

ವಿನಾಯಕ ಭಟ್ಟ said...

Chennagide, chennagide....

shivu.k said...

ತುಂಬಾ ಚೆನ್ನಾಗಿ ಚೊಕ್ಕವಾಗಿ ಚಿಕ್ಕದಾಗಿದೆ...

ವಿ.ರಾ.ಹೆ. said...

ಸ್ವಾಮಿ ಶರಣಂ, ಅಯ್ಯಪ್ಪ ಶರಣಂ :)

ಮಿಥುನ ಕೊಡೆತ್ತೂರು said...

ಪ್ರತ್ರಿಕ್ರಿಯಿಸಿದ ಬಂಧುಗಳಿಗೆ ನಮೋ ನಮಃ

ಮಿಥುನ ಕೊಡೆತ್ತೂರು said...

ಪ್ರತ್ರಿಕ್ರಿಯಿಸಿದ ಬಂಧುಗಳಿಗೆ ನಮೋ ನಮಃ